1 ತಿಮೊಥೆಯನಿಗೆ
ಗ್ರಂಥಕರ್ತೃತ್ವ
ಈ ಪತ್ರಿಕೆಯ ಗ್ರಂಥಕರ್ತನು ಪೌಲನು, ಇದು ಅಪೊಸ್ತಲನಾದ ಪೌಲನಿಂದ ಬರೆಯಲ್ಪಟ್ಟಿದೆ ಎಂದು 1 ತಿಮೊಥೆಯನ ಗ್ರಂಥವು ಸ್ಪಷ್ಟವಾಗಿ ತಿಳಿಸುತ್ತದೆ, “ನಮ್ಮ ರಕ್ಷಕನಾದ ದೇವರ ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು” (1 ತಿಮೊ. 1:1). ಆದಿ ಸಭೆಯು ಇದನ್ನು ಪೌಲನ ಯಥಾರ್ಥವಾದ ಪತ್ರಿಕೆ ಎಂದು ಸ್ಪಷ್ಟವಾಗಿ ಅಂಗೀಕರಿಸಿದೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 62-64 ರ ನಡುವೆ ಬರೆಯಲ್ಪಟ್ಟಿದೆ.
ಪೌಲನು ಎಫೆಸದಲ್ಲಿ ತಿಮೊಥೆಯನನ್ನು ಬಿಟ್ಟು, ಮಕೆದೋನ್ಯಕ್ಕೆ ಹೋದನು, ಅಲ್ಲಿಂದ ಆತನು ಅವನಿಗೆ ಈ ಪತ್ರಿಕೆಯನ್ನು ಬರೆದನು. (1 ತಿಮೊ. 1:3; 3:14,15).
ಸ್ವೀಕೃತದಾರರು
ಪೌಲನ ಪ್ರಯಾಣದ ಸಂಗಡಿಗನು ಮತ್ತು ಅವನ ಮಿಷನರಿ ಪ್ರಯಾಣದಲ್ಲಿ ಸಹಾಯಕನು ಆಗಿದ್ದ ತಿಮೊಥೆಯನಿಗೆ ಸಂಬೋಧಿಸಿ ಬರೆಯಲಾಗಿರುವುದ್ದರಿಂದ ಮೊದಲ ತಿಮೊಥೆಯನ ಪುಸ್ತಕಕ್ಕೆ ಅವನ ಹೆಸರನ್ನು ಇಡಲಾಗಿದೆ. ತಿಮೊಥೆಯನು ಮತ್ತು ಇಡೀ ಸಭೆಯು 1 ತಿಮೊಥೆಯನಿಗೆ ಬರೆದ ಪತ್ರಿಕೆಯ ಓದುಗರಾಗಿದ್ದಾರೆ.
ಉದ್ದೇಶ
ದೇವರ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಮೊಥೆಗೆ ಆದೇಶ ನೀಡಲು (3:14-15) ಮತ್ತು ತಿಮೊಥೆಯನು ಈ ಆದೇಶಗಳಿಗೆ ಸರಿಯಾಗಿ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಲು. ಈ ವಚನಗಳು 1 ತಿಮೊಥೆಯನ ಪುಸ್ತಕದ ಪೌಲನ ಉದ್ದೇಶದ ಹೇಳಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ದೇವರ ಮನೆಯಲ್ಲಿ ಅಂದರೆ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ಜೀವಸ್ವರೂಪನಾದ ದೇವರ ಸಭೆಯಲ್ಲಿ ಜನರು ಹೇಗೆ ನಡೆದುಕೊಳ್ಳಬೇಕು ಅವರಿಗೆ ತಿಳಿಯುವಂತೆ ಇದನ್ನು ಬರೆಯುತ್ತಿದ್ದಾನೆಂದು ಅವನು ಹೇಳಿದ್ದಾನೆ. ಈ ವಾಕ್ಯಭಾಗವು ಪೌಲನು ಪತ್ರಿಕೆಗಳನ್ನು ಕಳುಹಿಸಿ, ಸಭೆಗಳನ್ನು ಹೇಗೆ ಬಲಪಡಿಸಬೇಕು ಮತ್ತು ಕಟ್ಟಬೇಕು ಎಂದು ತನ್ನ ಜನರಿಗೆ ಆದೇಶಿಸುತ್ತಿರುವುದನ್ನು ಗೋಚರಪಡಿಸುತ್ತದೆ.
ಮುಖ್ಯಾಂಶ
ಯುವ ಶಿಷ್ಯನಿಗೆ ಆದೇಶಗಳು
ಪರಿವಿಡಿ
1. ಸೇವೆಗಾಗಿರುವ ಅಭ್ಯಾಸಗಳು — 1:1-20
2. ಸೇವೆಗಾಗಿರುವ ತತ್ವಗಳು — 2:1-3:16
3. ಸೇವೆಯಲ್ಲಿರುವ ಜವಾಬ್ದಾರಿಗಳು — 4:1-6:21
1
ನಮ್ಮ ರಕ್ಷಕನಾದ ದೇವರ *ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ, §ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ.
ಸುಳ್ಳುಬೋಧನೆಯ ಬಗ್ಗೆ ಎಚ್ಚರಿಕೆ
ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ, *ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ, ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, ವಂಶಾವಳಿಗಳೂ §ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ. *ಶುದ್ಧಹೃದಯ, ಒಳ್ಳೆಯ ಮನಸ್ಸಾಕ್ಷಿ, ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ. ಕೆಲವರು ಈ ಗುರಿಯನ್ನು ಬಿಟ್ಟು §ವ್ಯರ್ಥವಾದ ವಿಚಾರಗಳ ಕಡೆಗೆ ತಿರುಗಿಕೊಂಡಿದ್ದಾರೆ. ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ, *ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ. ಧರ್ಮಶಾಸ್ತ್ರವು ಒಳ್ಳೆಯದೆಂದು ಬಲ್ಲೆವು. ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು. ಧರ್ಮಶಾಸ್ತ್ರವು ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು, 10 ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, §ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ. 11 ಈ ಬೋಧನೆಯು *ಭಾಗ್ಯವಂತನಾದ ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ. ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು.
12-13  §ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, *ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ §ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು; 14 ಆದರೆ *ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು. 15  ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು §ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ, ಯಾಕೆಂದರೆ *ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು. 16 ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು. 17  ಸರ್ವಯುಗಗಳ ಅರಸನೂ, ಅಮರನೂ, §ಅದೃಶ್ಯನೂ ಆಗಿರುವ *ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.
18 ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ. 19  §ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ. 20  *ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.
* 1:1 1:1 ಕೊಲೊ 1:27 1:1 1:1 2 ಕೊರಿ 1:1 1:2 1:2 ತೀತ 1:4 § 1:2 1:2 2 ತಿಮೊ 1:2; 2 ಯೊಹಾ 3; ಯೂದ 2 * 1:3 1:3 1 ತಿಮೊ 6:3 ಗಲಾ 1:6,7 1:4 1:4 1 ತಿಮೊ 4:7; 2 ತಿಮೊ 4:4; ತೀತ 1:14; 2 ಪೇತ್ರ 1:16 1:4 1:4 ತೀತ 3:9 § 1:4 1:4 1 ತಿಮೊ. 6:4 * 1:5 1:5 2 ತಿಮೊ. 2:22 1:5 1:5 1 ಪೇತ್ರ. 3:16, 21 1:5 1:5 2 ತಿಮೊ 1:5 § 1:6 1:6 ತೀತ 1:10 * 1:7 1:7 1 ತಿಮೊ 6:4; ಕೊಲೊ 2:18 1:8 1:8 ರೋಮ 7:16 1:9 1:9 ಗಲಾ 5:23 § 1:10 1:10 2 ತಿಮೊ 4:3; ತೀತ 1:9; 2:1; 1 ತಿಮೊ 6:3; 2 ತಿಮೊ 1:13; ತೀತ 1:13, 2:2 * 1:11 1:11 1 ತಿಮೊ 6:15 1:11 1:11 2 ಕೊರಿ 4:4 1:11 1:11 ತೀತ 1:3,4; ಗಲಾ 2:7 § 1:12-13 1:12-13 ಆ. ಕೃ 9:22; ಫಿಲಿ 4:13; 2 ತಿಮೊ 4:17 * 1:12-13 1:12-13 ಆ. ಕೃ 8:3 1:12-13 1:12-13 2 ಕೊರಿ 3:6 1:12-13 1:12-13 ಆ. ಕೃ. 3:17 § 1:12-13 1:12-13 1 ಕೊರಿ 7:25; 2 ಕೊರಿ 4:1 * 1:14 1:14 ರೋಮ 5:20 1:14 1:14 ಲೂಕ 7:47, 50; 1 ಥೆಸ. 1:3 1:15 1:15 ಮತ್ತಾ 9:13; ಯೋಹಾ 3:17; ರೋಮ 4:25 § 1:15 1:15 1 ತಿಮೊ 3:1; 4:9; 2 ತಿಮೊ. 2:11; ತೀತ 3:8 * 1:15 1:15 1 ಕೊರಿ 15:9 1:17 1:17 ಪ್ರಕ 15:3; 4:9,10 1:17 1:17 1 ತಿಮೊ 6:15,16; ರೋಮ 1:23 § 1:17 1:17 ಯೋಹಾ 1:18; ಕೊಲೊ 1:15; ಇಬ್ರಿ 11:27; 1 ಯೋಹಾ 4:12 * 1:17 1:17 ಯೂದ 25 1:18 1:18 1 ತಿಮೊ 4:14 1:18 1:18 1 ಕೊರಿ 9:7; 2 ಕೊರಿ 10:4; 2 ತಿಮೊ 2:3,4 § 1:19 1:19 1 ತಿಮೊ 3:9 * 1:20 1:20 2 ತಿಮೊ 2:7; 1:20 1:20 1 ತಿಮೊ 4:14 1:20 1:20 ಕೊರಿ 5:5