ಪ್ರಸಂಗಿ
ಗ್ರಂಥಕರ್ತೃತ್ವ
ಪ್ರಸಂಗಿಯ ಗ್ರಂಥವು ಅದರ ಗ್ರಂಥಕರ್ತನನ್ನು ಪ್ರತ್ಯಕ್ಷವಾಗಿ ಗುರುತಿಸುವುದಿಲ್ಲ. ಪ್ರಸಂಗಿ 1:1 ರಲ್ಲಿ ಕ್ಹೊಹೆಲೆಥ್ ಎಂಬ ಹೀಬ್ರೂ ಪದದಿಂದ ಗ್ರಂಥಕರ್ತನು ತನ್ನನ್ನು ತಾನು ಗುರುತಿಸಿಕೊಂಡಿದ್ದಾನೆ, ಆ ಪದವನ್ನು “ಪ್ರಸಂಗಿ” ಎಂದು ಅನುವಾದಿಸಲಾಗಿದೆ. ದಾವೀದನ ಮಗನೂ ಯೆರೂಸಲೇಮಿನಲ್ಲಿ ಆಳುವ ಅರಸನೂ, ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡವನು, ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ ಕ್ರಮಪಡಿಸಿದನು ಎಂದು ತನ್ನನ್ನು ತಾನು ಕರೆದುಕೊಳ್ಳುತ್ತಾನೆ (ಪ್ರಸಂಗಿ 1:1,16; 12:9). ದಾವೀದನ ಏಕೈಕ ಮಗನಾಗಿದ್ದ ಸೊಲೊಮೋನನು ಆ ಪಟ್ಟಣದಿಂದ ಎಲ್ಲಾ ಇಸ್ರಾಯೇಲ್ಯರನ್ನು ಆಳುವುದಕ್ಕಾಗಿ ದಾವೀದನ ನಂತರ ಯೆರೂಸಲೇಮಿನಲ್ಲಿ ಸಿಂಹಾಸನವನ್ನೇರಿದ್ದನು (1:12). ಸೊಲೊಮೋನನ್ನೇ ಈ ಪುಸ್ತಕವನ್ನು ಬರೆದಿದ್ದಾನೆಂದು ಸೂಚಿಸುವ ಕೆಲವೇ ಕೆಲವು ವಚನಗಳಿವೆ. ಸೊಲೊಮೋನನ ಮರಣದ ನಂತರ, ಬಹುಶಃ ನೂರಾರು ವರ್ಷಗಳ ನಂತರ ಈ ಪುಸ್ತಕವನ್ನು ವಿಭಿನ್ನ ವ್ಯಕ್ತಿಯು ಬರೆದಿರಬಹುದು ಎಂದು ಸೂಚಿಸುವಂಥ ಕೆಲವು ಸುಳಿವುಗಳು ಸನ್ನಿವೇಶದಲ್ಲಿವೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಪೂ. 940-931 ರ ನಡುವಿನ ಕಾಲದಲ್ಲಿ ಬರೆದಿರಬಹುದು.
ಬಹುಶಃ ಪ್ರಸಂಗಿಯ ಪುಸ್ತಕವು ಸೊಲೊಮೋನನ ಆಳ್ವಿಕೆಯ ಅಂತ್ಯಕಾಲದಲ್ಲಿ ಬರೆಯಲ್ಪಟ್ಟಿರಬಹುದು, ಇದು ಯೆರೂಸಲೇಮಿನಲ್ಲಿ ಬರೆಯಲ್ಪಟ್ಟಿದೆ ಎಂದು ತೋರುತ್ತದೆ.
ಸ್ವೀಕೃತದಾರರು
ಪ್ರಸಂಗಿಯ ಪುಸ್ತಕವು ಪ್ರಾಚೀನ ಇಸ್ರಾಯೇಲ್ಯರಿಗಾಗಿ ಮತ್ತು ನಂತರದ ಎಲ್ಲಾ ಸತ್ಯವೇದದ ಓದುಗರಿಗಾಗಿ ಬರೆಯಲಾಯಿತ್ತು.
ಉದ್ದೇಶ
ಈ ಪುಸ್ತಕವು ನಮಗೆ ಕಠಿಣ ಎಚ್ಚರಿಕೆಯಾಗಿ ನಿಲ್ಲುತ್ತದೆ. ಗೊತ್ತುಗುರಿಯಿಲ್ಲದೆ ಮತ್ತು ದೇವರ ಭಯವಿಲ್ಲದೆ ಜೀವಿಸುವ ಜೀವನವು ನಿರರ್ಥಕವಾದುದು, ಮತ್ತು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವಾದುದು ಆಗಿದೆ. ನಾವು ಸುಖಸಂತೋಷ, ಸಂಪತ್ತು, ಸೃಜನಶೀಲ ಚಟುವಟಿಕೆ, ಜ್ಞಾನ ಅಥವಾ ಸರಳವಾದ ಆನಂದವನ್ನು ಹಿಂದಟ್ಟಿದರೂ, ನಾವು ಜೀವನದ ಅಂತ್ಯಕ್ಕೆ ಬರುತ್ತೇವೆ ಮತ್ತು ನಮ್ಮ ಜೀವನವನ್ನು ವ್ಯರ್ಥವಾಗಿ ಜೀವಿಸಿದ್ದೇವು ಎಂದು ಕಂಡುಕೊಳ್ಳುತ್ತೇವೆ. ದೇವರ ಮೇಲೆ ಕೇಂದ್ರೀಕೃತವಾಗಿರುವ ಜೀವನದ ಮೂಲಕ ಮಾತ್ರವೇ ಜೀವನಕ್ಕೆ ಅರ್ಥ ಬರುತ್ತದೆ.
ಮುಖ್ಯಾಂಶ
ದೇವರಿಗೆ ಬೇರೆಯಾದ ಸಕಲವು ವ್ಯರ್ಥ
ಪರಿವಿಡಿ
1. ಪೀಠಿಕೆ — 1:1-11
2. ಜೀವನದ ವಿವಿಧ ಅಂಶಗಳ ವ್ಯರ್ಥತೆ — 1:12-5:7
3. ದೇವರ ಭಯ — 5:8-12:8
4. ಅಂತಿಮ ಸಮಾಪ್ತಿ — 12:9-14
1
ಎಲ್ಲವೂ ವ್ಯರ್ಥ
ಯೆರೂಸಲೇಮಿನಲ್ಲಿ ಅರಸನಾಗಿದ್ದ ದಾವೀದನ ಮಗನಾದ ಪ್ರಸಂಗಿಯ ಮಾತುಗಳು. ಪ್ರಸಂಗಿಯು ಹೀಗೆ ಹೇಳುತ್ತಾನೆ.
“ವ್ಯರ್ಥವೇ ವ್ಯರ್ಥ,
ವ್ಯರ್ಥವೇ ವ್ಯರ್ಥ,
ಸಮಸ್ತವೂ ವ್ಯರ್ಥ.
ಈ ಲೋಕದಲ್ಲಿ* 1:3 ಈ ಲೋಕದಲ್ಲಿ ಅಥವಾ ಸೂರ್ಯನ ಕೆಳಗೆ. ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಲಾಭವೇನು?
ಒಂದು ಸಂತತಿಯು ಹೋಗುವುದು,
ಇನ್ನೊಂದು ಸಂತತಿಯು ಬರುವುದು,
ಆದರೆ ಭೂಮಿಯು ಶಾಶ್ವತವಾಗಿ ನಿಲ್ಲುವುದು.
ಸೂರ್ಯನು ಉದಯಿಸುತ್ತಾನೆ.
ಸೂರ್ಯನು ಮುಳುಗುತ್ತಾನೆ.
ತಾನು ಉದಯಿಸುವ ಸ್ಥಾನಕ್ಕೆ ಅವಸರವಾಗಿ ಹಿಂತಿರುಗಿ ಹೋಗುತ್ತಾನೆ.
ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ.
ಉತ್ತರದ ಕಡೆಗೆ ತಿರುಗುವುದು.
ಅದು ಸುತ್ತುತ್ತಾ ಸುತ್ತುತ್ತಾ ಹೋಗಿ,
ಗಾಳಿ ಸುತ್ತಳತೆಯ ಪ್ರಕಾರ ಹಿಂದಿರುಗುತ್ತವೆ.
ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತವೆ.
ಆದರೂ ಸಮುದ್ರವು ತುಂಬುವುದಿಲ್ಲ.
ನದಿಗಳು ಎಲ್ಲಿಂದ ಬಂದಿವೆಯೋ
ಅದೇ ಸ್ಥಳಕ್ಕೆ ಹಿಂತಿರುಗುತ್ತವೆ.
ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿದೆ.
ಇದನ್ನು ಮನುಷ್ಯನು ವಿವರಿಸಲಾರನು.
ನೋಡುವುದರಿಂದ ಕಣ್ಣು ತೃಪ್ತಿಗೊಳ್ಳದು,
ಕೇಳುವುದರಿಂದ ಕಿವಿಯು ದಣಿಯದು.
ಇದ್ದದ್ದೇ ಇರುವುದು,
ನಡೆದದ್ದೇ ನಡೆಯುವುದು.
ಸೂರ್ಯನ ಕೆಳಗೆ ಹೊಸದಾದದ್ದು ಯಾವುದೂ ಇಲ್ಲ.
10 ‘ನೋಡು, ಇದು ಹೊಸದು’ ಎಂದು ಯಾವ ವಿಷಯದಲ್ಲಾದರೂ ಹೇಳಬಹುದೋ?
ನಮಗಿಂತ ಮೊದಲು ಇದ್ದದ್ದು,
ಪುರಾತನ ಕಾಲದಿಂದ ಇದ್ದದ್ದೇ.
11 ಪುರಾತನ ಕಾಲದಲ್ಲಿ ನಡೆದ ಸಂಗತಿಗಳ ಜ್ಞಾಪಕವು ಈಗಿನ ಜನರಿಗೆ ಇಲ್ಲ.
ಮುಂದಿನ ಕಾಲದಲ್ಲಿ ನಡೆಯುವ ಸಂಗತಿಗಳ ಜ್ಞಾಪಕವು ಮುಂದಿನ ಕಾಲದ ಜನರಿಗೆ ಇರುವುದಿಲ್ಲ.”
12 ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲರಿಗೆ ಅರಸನಾಗಿದ್ದೆನು. 13 ಆಕಾಶದ ಕೆಳಗಡೆ ನಡೆಯುವ ಎಲ್ಲಾ ಕೆಲಸಗಳನ್ನು ಜ್ಞಾನದಿಂದ ವಿಚಾರಿಸಿ ವಿಮರ್ಶಿಸುವುದಕ್ಕೆ ನನ್ನ ಮನಸ್ಸನ್ನು ಇಟ್ಟೆನು. ದೇವರು ಮನುಷ್ಯರ ಮೇಲೆ ನೇಮಿಸಿರುವ ಕೆಲಸವೆಲ್ಲಾ ಬಹು ಪ್ರಯಾಸವೇ. 14 ಲೋಕದಲ್ಲಿ ನಡೆಯುವ ಎಲ್ಲಾ ಕೆಲಸಗಳನ್ನು ನೋಡಿದ್ದೇನೆ. ಆಹಾ, ಗಾಳಿಯನ್ನು ಹಿಂದಟ್ಟುವ 1:14 ಗಾಳಿಯನ್ನು ಹಿಂದಟ್ಟುವ ಅಥವಾ ಗಾಳಿಯನ್ನು ತಿನ್ನುವ ಹಾಗೆ. ಹಾಗೆ ಸಮಸ್ತವೂ ವ್ಯರ್ಥ.
15 ವಕ್ರವಾದದ್ದನ್ನು ಸರಿಮಾಡುವುದಕ್ಕೆ ಆಗುವುದಿಲ್ಲ!
ಇಲ್ಲದ್ದನ್ನು ಲೆಕ್ಕಿಸುವುದಕ್ಕೆ ಅಸಾಧ್ಯ!
ಜ್ಞಾನಿಯ ಅನಿಸಿಕೆ
16 ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ, “ನೋಡು, ನನಗಿಂತ ಮೊದಲು ಯೆರೂಸಲೇಮನ್ನು ಆಳಿದವರೆಲ್ಲರಿಗಿಂತಲೂ ಹೆಚ್ಚು ಜ್ಞಾನವನ್ನು ಸಂಪಾದಿಸಿಕೊಂಡಿದ್ದೇನೆ. ನನ್ನ ಹೃದಯವು ಜ್ಞಾನವನ್ನೂ, ತಿಳಿವಳಿಕೆಯನ್ನೂ ವಿಶೇಷವಾಗಿ ಹೊಂದಿದೆ” ಎಂದುಕೊಂಡೆನು. 17 ಆಗ ಜ್ಞಾನವನ್ನೂ, ಹುಚ್ಚುತನವನ್ನೂ, ಬುದ್ಧಿಹೀನತೆಯನ್ನೂ ಗ್ರಹಿಸಲು ನಾನು ಮನಸ್ಸಿಟ್ಟೆನು. ಇದು ಸಹ ಗಾಳಿಯನ್ನು ಹಿಂದಟ್ಟುವ ಹಾಗೆ ಎಂದು ನಾನು ಅರಿತುಕೊಂಡೆನು. 18 ಏಕೆಂದರೆ ಬಹಳ ಜ್ಞಾನವಿದ್ದಲ್ಲಿ ಬಹಳ ಸಂಕಟ. ಹೆಚ್ಚು ತಿಳಿವಳಿಕೆಯನ್ನು ಪಡೆದವನಿಗೆ ಹೆಚ್ಚು ವ್ಯಥೆ ಇದೆ.

*1:3 1:3 ಈ ಲೋಕದಲ್ಲಿ ಅಥವಾ ಸೂರ್ಯನ ಕೆಳಗೆ.

1:14 1:14 ಗಾಳಿಯನ್ನು ಹಿಂದಟ್ಟುವ ಅಥವಾ ಗಾಳಿಯನ್ನು ತಿನ್ನುವ ಹಾಗೆ.