2 ತಿಮೊಥೆಯನಿಗೆ  
ಗ್ರಂಥಕರ್ತೃತ್ವ  
ರೋಮಾಪುರದ ಸೆರೆಮನೆಯಿಂದ ಪೌಲನು ಬಿಡುಗಡೆಯಾದ ನಂತರ ಮತ್ತು ನಾಲ್ಕನೇ ಮಿಷನರಿ ಪ್ರಯಾಣದಲ್ಲಿ ಅವನು 1 ತಿಮೊಥೆಯನ ಪತ್ರಿಕೆಯನ್ನು ಬರೆದ ನಂತರ, ಮತ್ತೆ ಪೌಲನನ್ನು ನೀರೋ ಚಕ್ರವರ್ತಿಯ ಆಳ್ವಿಕೆಯಡಿಯಲ್ಲಿ ಸೆರೆಮನೆಗೆ ಹಾಕಲಾಯಿತು. ಈ ಸಮಯದಲ್ಲಿ ಅವನು 2 ತಿಮೊಥೆಯನ ಪತ್ರಿಕೆಯನ್ನು ಬರೆದನು. ಅವನು ಮೊದಲ ಬಾರಿ ಸೆರೆಮನೆಯಲ್ಲಿದ್ದಾಗ, ಅವನು ‘ಬಾಡಿಗೆ ಮನೆ’ ಯಲ್ಲಿ (ಅ.ಪೊ. 28:30) ವಾಸವಾಗಿದ್ದ ಸ್ಥಿತಿಗೂ ಇದಕ್ಕೂ ವ್ಯತ್ಯಾಸವಿದೆ, ಈಗ ಅವನು ಸಾಮಾನ್ಯ ಅಪರಾಧಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿ (1:16; 2:9), ಶೀತಲ ಕಾರಾಗೃಹದಲ್ಲಿ ಬಳಲುತ್ತಿದ್ದಾನೆ (4:13). ತನ್ನ ಕೆಲಸವು ಮುಗಿದಿದೆ ಮತ್ತು ತನ್ನ ಜೀವನದ ಅಂತ್ಯವು ಸಮೀಪವಾಗಿದೆ ಎಂದು ಪೌಲನಿಗೆ ತಿಳಿದಿತ್ತು (4: 6-8).  
ಬರೆದ ದಿನಾಂಕ ಮತ್ತು ಸ್ಥಳ  
ಸರಿಸುಮಾರು ಕ್ರಿ.ಶ. 66-67 ರ ನಡುವೆ ಬರೆಯಲ್ಪಟ್ಟಿದೆ.  
ಪೌಲನು ರೋಮಾಪುರದಲ್ಲಿ ತನ್ನ ಎರಡನೆಯ ಸೆರೆವಾಸದಲ್ಲಿದ್ದುಕೊಂಡು, ತನ್ನ ರಕ್ತಸಾಕ್ಷಿಯ ಮರಣಕ್ಕಾಗಿ ಕಾಯುತ್ತಿರುವಾಗ ಅವನು ಈ ಪತ್ರಿಕೆಯನ್ನು ಬರೆದನು.  
ಸ್ವೀಕೃತದಾರರು  
ತಿಮೊಥೆಯು ಎರಡನೆಯ ತಿಮೊಥೆಯನ ಪತ್ರಿಕೆಯ ಪ್ರಾಥಮಿಕ ಓದುಗನಾಗಿದ್ದಾನೆ, ಆದರೆ ಖಂಡಿತವಾಗಿ ಅವನು ಸಭೆಯೊಂದಿಗೆ ಇದರ ವಿಷಯವನ್ನು ಹಂಚಿಕೊಂಡನು.  
ಉದ್ದೇಶ  
ತಿಮೊಥೆಯನಿಗೆ ಅಂತಿಮ ಪ್ರೋತ್ಸಾಹವನ್ನು ನೀಡಲು ಮತ್ತು ಪೌಲನು ಅವನಿಗೆ ವಹಿಸಿಕೊಟ್ಟ ಕಾರ್ಯಭಾರವನ್ನು ಧೈರ್ಯದಿಂದ (1:3-14), ಶ್ರದ್ಧೆಯಿಂದ (2:1-26), ಮತ್ತು ನಿಷ್ಠೆಯಿಂದ (3:14-17; 4:1-8) ಮುಂದುವರಿಸುವಂತೆ ಪ್ರೇರೇಪಿಸಲು ಬರೆದನು.  
ಮುಖ್ಯಾಂಶ  
ನಂಬಿಗಸ್ತವಾದ ಸೇವೆಗಾಗಿ ನಿಯೋಗ  
ಪರಿವಿಡಿ  
1. ಸೇವೆಗೆ ಪ್ರೇರಣೆ — 1:1-18  
2. ಸೇವೆಯಲ್ಲಿರಬೇಕಾದ ಮಾದರಿ — 2:1-26  
3. ಸುಳ್ಳು ಬೋಧನೆಯ ವಿರುದ್ಧ ಎಚ್ಚರಿಕೆ — 3:1-17  
4. ಪ್ರೋತ್ಸಾಹದ ಮಾತುಗಳು ಮತ್ತು ಆಶೀರ್ವಾದಗಳು — 4:1-22   
 1
ಪೀಠಿಕೆ 
  1 ಕ್ರಿಸ್ತಯೇಸುವಿನಲ್ಲಿರುವ 
*ಜೀವ ವಾಗ್ದಾನವನ್ನು ತಿಳಿಯಪಡಿಸುವುದಕ್ಕೋಸ್ಕರ 
†ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ 
‡ಅಪೊಸ್ತಲನಾದ ಪೌಲನು,   
2 §ತನ್ನ ಪ್ರಿಯ ಕುಮಾರನಾದ ತಿಮೊಥೆಯನಿಗೆ ಬರೆಯುವುದೇನಂದರೆ, 
*ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತಯೇಸುವಿನಿಂದಲೂ ನಿನಗೆ ಕೃಪೆಯೂ, ಕರುಣೆಯೂ, ಶಾಂತಿಯೂ ಆಗಲಿ.   
 ತಿಮೊಥೆಯನು ಸುವಾರ್ತಾಸೇವೆಯಲ್ಲಿ ನಂಬಿಗಸ್ತನಾಗಿರಬೇಕೆಂದು ಬೋಧನೆ 
  3 †ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ 
‡ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ. 
§ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ 
*ಸ್ತೋತ್ರಸಲ್ಲಿಸುತ್ತೇನೆ.   
4 ನಾನು 
†ನಿನ್ನ ಕಣ್ಣೀರನ್ನು ನೆನಪಿಗೆ ತಂದು 
‡ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ.   
5 ನಿನ್ನಲ್ಲಿರುವ 
§ಯಥಾರ್ಥವಾದ ನಂಬಿಕೆಯು ನನ್ನ ನೆನಪಿಗೆ ಬಂದಿತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಳಲ್ಲಿಯೂ 
*ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು. ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.   
  6 ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತವನ್ನಿಟ್ಟದರ ಮೂಲಕ ನಿನಗೆ ದೊರಕಿದ 
†ದೇವರ ಕೃಪಾವರವನ್ನು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನ್ನನ್ನು ಜ್ಞಾಪಿಸುತ್ತಿದ್ದೇನೆ.   
7 ದೇವರು ನಮಗೆ ಕೊಟ್ಟಿರುವ ಆತ್ಮವು 
‡ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು 
§ಹೇಡಿತನದ ಆತ್ಮವಲ್ಲ.   
  8 ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ 
*ಸಾಕ್ಷಿಯ ವಿಷಯದಲ್ಲಾಗಲಿ ಆತನ 
†ಸೆರೆಯವನಾದ ನನ್ನ ವಿಷಯದಲ್ಲಾಗಲಿ 
‡ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ 
§ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು.   
9 *ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, 
†ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ 
‡ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು 
§ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ,   
10 ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ 
*ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ. 
†ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ.   
  11 ‡ಆ ಸುವಾರ್ತೆಗೋಸ್ಕರ ನಾನು ಪ್ರಚಾರಕನಾಗಿಯೂ, ಅಪೊಸ್ತಲನಾಗಿಯೂ ಮತ್ತು ಬೋಧಕನಾಗಿಯೂ ನೇಮಿಸಲ್ಪಟ್ಟೆನು.   
12 §ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. 
*ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು 
†ಆತನು 
‡ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ.   
13 ನೀನು 
§ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ, ನನ್ನಿಂದ ಕೇಳಿದ 
*ಸ್ವಸ್ಥಬೋಧನಾ ವಾಕ್ಯಗಳನ್ನು ಮಾದರಿಯಾಗಿಟ್ಟುಕೊಂಡು ಅನುಸರಿಸು.   
14 †ನಿನ್ನ ವಶಕ್ಕೆ ಒಪ್ಪಿಸಿಕೊಟ್ಟಿರುವ ಒಳ್ಳೆಯ ವಿಷಯವನ್ನು 
‡ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕವಾಗಿ ಕಾಪಾಡಿಕೋ.   
  15 §ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬುದನ್ನು ನೀನು ಬಲ್ಲೆ. ಅವರಲ್ಲಿ ಪುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ.   
16 *ಒನೇಸಿಪೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ, ಅವನು ಹಲವುಬಾರಿ ನನ್ನನ್ನು ಉಪಚರಿಸಿದನು. 
†ನನ್ನ ಬೇಡಿಗಳಿಗೆ ನಾಚಿಕೆಪಡದೆ,   
17 ರೋಮಾಪುರಕ್ಕೆ ಬಂದಕೂಡಲೆ 
‡ಬಹು ಆಸಕ್ತಿಯಿಂದ ವಿಚಾರಿಸಿ ನನ್ನನ್ನು ಹುಡುಕಿ ಕಂಡುಕೊಂಡನು.   
18 ಅವನು ಆ ದಿನದಲ್ಲಿ ಕರ್ತನಿಂದ ಕರುಣೆಯನ್ನು ಹೊಂದುವಂತೆ ಕರ್ತನು ಅವನಿಗೆ ಅನುಗ್ರಹಿಸಲಿ. ಎಫೆಸದಲ್ಲಿ ಅವನು ನನಗೆ ಎಷ್ಟೋ ಉಪಚಾರಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ.